ತುಂತುರು ಮಳೆಯ ಜೊತೆ ರಾತ್ರಿ ಬೈಕ್ ಪ್ರವಾಸ
ಕಳೆದ ವರ್ಷ ಗಂಡಿಕೋಟ, ಬೇಲುಂ ಬೈಕ್ ಟ್ರಿಪ್ ಮುಗಿಸಿ ಹೊಸಕೋಟೆ ಟೋಲ್ ಬಳಿ ನಿಂತಾಗ ಮುಂದಿನ ವರ್ಷ ಯಾವ ಕಡೆಗೆ ಹೋಗಬೇಕು ಎಂಬ ಬಗ್ಗೆ ಚರ್ಚೆ ನಡೆಯುವಾಗ ಪಟಕ್ ಅಂತ ಹೊಳೆದದ್ದೇ ವಯನಾಡ್. ಬೈಕಿನಲ್ಲೇ ಕರ್ನಾಟಕದ ಸಮೀಪದ ರಾಜ್ಯಗಳನ್ನು ಸುತ್ತಬೇಕು ಎನ್ನುವ ಮಹತ್ವಾಕಾಂಕ್ಷೆಯ ಯೋಜನೆ ಹಾಕಿಕೊಂಡ ಹಿನ್ನೆಲೆಯಲ್ಲಿ ತಮಿಳುನಾಡು(ಯೆರ್ಕಾಡ್, ಹೊಗೆನಕಲ್) ಕರ್ನಾಟಕ(ಹಾಸನ, ಚಿಕ್ಕಮಗಳೂರು), ಆಂಧ್ರಪ್ರದೇಶ(ಲೇಪಾಕ್ಷಿ, ಗಂಡಿಕೋಟ, ಬೇಲುಂ) ಸುತ್ತಿಯಾಗಿತ್ತು. ಹೀಗಾಗಿ ಕೇರಳ ಒಂದು ಬಾಕಿ ಇತ್ತು. ಈ ಕಾರಣಕ್ಕೆ ವಯನಾಡನ್ನು ಬೈಕಿನ ಮೇಲೆ ಕುಳಿತು ಅಲ್ಲೇ ಫೈನಲ್ ಮಾಡಿದೆವು. ಒಂದು ವರ್ಷದ ಜಾಗ ಫೈನಲ್ ಆದ್ರೂ ದಿನಾಂಕ ಅಂತಿಮವಾಗಿರಲಿಲ್ಲ. ಕೊನೆಗೆ 3 ತಿಂಗಳ ಹಿಂದೆ ಅ.12,13 ಹೋಗುವುದಾಗಿ ನಿಶ್ಚಯಿಸಲಾಯಿತು. ಪ್ರತಿ ಬಾರಿಯೂ ಮುಂಜಾನೆ 4 ಗಂಟೆಗೆ ನಮ್ಮ ಪ್ರಯಾಣ ಆರಂಭವಾಗುತಿತ್ತು. ಯಾವಾಗಲೂ ಒಂದೇ ರೀತಿ ಇದ್ದರೆ ಚೆನ್ನಾಗಿ ಇರುವುದಿಲ್ಲವಲ್ಲ. ಹೀಗಾಗಿ ಈ ಬಾರಿ ಬದಲಾವಣೆ ಇರಲಿ ಎನ್ನುವ ಕಾರಣಕ್ಕೆ ರಾತ್ರಿ ಪ್ರಯಾಣಕ್ಕೆ ನಾವು ಜೈ ಎಂದ್ವಿ. ನಿಗದಿಯಂತೆ ಕೆಂಗೇರಿ ನೈಸ್ ರಸ್ತೆಯ ಮುಂದಿರುವ ಕದಂಬ ಹೋಟೆಲಿಗೆ ಶುಕ್ರವಾರ ರಾತ್ರಿ 7:30ರ ಒಳಗೆ ಎಲ್ಲರೂ ಬರುವುದು. ಅಲ್ಲಿ ಟೀ ಕುಡಿದು ರಾತ್ರಿ 10 ಗಂಟೆಗೆ ಮೈಸೂರು ಹೋಟೆಲ್ ತಲುಪಿ ಮುಂಜಾನೆ ಅಲ್ಲಿಂದ ಹೊರಡುವ ಪ್ಲಾನ್ ಮಾಡಿಕೊಂಡಿದ್ದೆವು.ರಾತ್ರಿ ನಿಗದಿಯಾದ ಸಮಯದ ಒಳಗಡೆ 5 ಜನ ಹೋಟೆಲಿನಲ್ಲಿ ಇದ್